Tuesday, 11 October 2022

ಈ ಕವಿತೆ,
ನಾನು ಬರೆಯಬೇಕೆಂದುಕೊಂಡ  ಕವಿತೆಯಲ್ಲವೇ ಅಲ್ಲ...
ನನ್ನ ಬರೆಯುವ ಮೇಜಿನ  ಎದುರು
ಕುಳಿತಾಗ, 
ಎದುರಿಗೊಂದು ಖಾಲಿಪುಟ ಇಟ್ಟುಕೊಂಡಾಗ,
ತಲೆಯಲ್ಲಿದ್ದ ವಿಚಾರಗಳೇ ಒಂದು...
ಬರೆದು ಮುಗಿಸಿದಾಗ
ಪುಟಗಳಲ್ಲಿ ಮೂಡಿಬಂದ
ಸಾಲುಗಳೇ ಬೇರೊಂದು...

ಈ ಕವಿತೆ 
ಪ್ರಪಂಚದಿಂದ ಯುದ್ಧಗಳನ್ನೆಲ್ಲ ಆಮೂಲಾಗ್ರವಾಗಿ ಕಿತ್ತೆಸೆಯಬಲ್ಲ,
ಜಗತ್ತನ್ನೇ ಹರಿದು ಹಂಚಿ ಛಿದ್ರ ವಿಚ್ಛಿದ್ರ
ವಾಗಿಸಿದ ದುಷ್ಟ ಶಕ್ತಿಗಳನ್ನೆಲ್ಲ ಸದೆ ಬಡಿದು ದೇಶದೆಲ್ಲ 
ನೋವುಗಳಿಗೂ ಮುಲಾಮು ಆಗಬಲ್ಲ
ಕವಿತೆ ಯಾಗಬಹುದೆಂದು ಕೊಂಡಿದ್ದೆ...
ಇಲ್ಲ,ಹಾಗಾಗಲೇಯಿಲ್ಲ...
ಪ್ರೇಮಿಗಳು ಆ ಕವಿತೆಯ ಸಾಲುಗಳನ್ನು
ನಿತ್ಯ ಉಲಿಯುವಂತೆ,
ಈ ಕವನವನ್ನು ಜೋಗುಳವಾಗಿಸಿ
ಅಳುವ ಮಕ್ಕಳನ್ನು 
ಸಂತೈಸಿ ಅಮ್ಮಂದಿರು ನಲಿಯುವಂತೆ,
ಎಲ್ಲ ತಲೆಮಾರುಗಳಿಗೂ
ಹೊಸ ಭರವಸೆಯೊಂದು
ಉಳಿಯುವಂತೆ,
ಬರೆಯಬೇಕೆಂದಿದ್ದೆ...
ಊಹುಂ- 
ಅದಾಗಲೇಯಿಲ್ಲ...

ನನ್ನನ್ನು ನಂಬಿ...
ಅಗಾಧ ನಿರೀಕ್ಷೆಗಳೊಂದಿಗೆ,
ಮಾನವತೆಯ
ಅಪರೂಪದ ದೃಷ್ಟಾಂತಗಳನ್ನು ನೀಡುವ ನೀತಿಪಾಠಗಳ
ಮಿಳಿತ ಕವಿತೆ ಬರೆಯ ಬೇಕೆಂದೆ...
ಯಾವಾಗ, ಎಲ್ಲಿ, ಏಕೆ, ಹೇಗೆ  ಸೂಕ್ತ ಶಬ್ದಗಳು ತಪ್ಪಿಸಿಕೊಂಡು
ಈ ಪದಗಳಿಲ್ಲಿ ನುಸುಳಿದವೋ
ತಿಳಿಯಲೇಯಿಲ್ಲ...

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...