Sunday, 2 October 2022

'ದುಃಖ'
-ವೆಂದರೆ,
ನನಗೆ ಬೇರೆಯದೇ ಒಂದು ಭಾವವಿತ್ತು-

ಅದು-
ಮನಸ್ಸಿಗೆ ಹತ್ತಿರವಾದವರ  
ಸಾವು- ನೋವಿನಲ್ಲಿದೆ ಎಂಬುದೊಂದು
ಅನಿಸಿಕೆಯಿತ್ತು...
ಅದನ್ನು ದಾಟಿ ದಡ ಸೇರುವದು  ನಿಜಕ್ಕೂ ತೀರದ 'ಸೆಣಸಾಟ' 
ಅಂದುಕೊಂಡಿದ್ದೆ...

ಇಲ್ಲ -
ಹಾಗೆ ದಾಟಿ ಸೇರಬಹುದಾದ ದಡವೆಂಬುದು ಇಲ್ಲವೇಯಿಲ್ಲ-
ಎಂಬುದೀಗ ನನಗೆ ಅರಿವಾಗಿದೆ...

ಏನಿದ್ದರೂ ಅದನ್ನು ತಾಳಿಕೊಳ್ಳಬೇಕು,
ಅದರೊಂದಿಗೆ ರಾಜಿಯಾಗಬೇಕು,
ಕೊನೆಯವರೆಗೂ ಅದು ಇರುವದೇ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು-

ದುಃಖವೆಂದರೆ ಅನುಭವಿಸಿ ಮುಗಿಸಬಹುದಾದದ್ದಲ್ಲ, 
'ಮುಗಿಯಿತು' ಎಂದು ನಿರಾಳವಾಗುವದಂತೂ ಅಲ್ಲವೇ ಅಲ್ಲ-

ಅದೆಂದರೆ, ಒಂದು ಪರಿಹಾರ,
ನಮ್ಮೊಳಗೇ ಇರುವ 
ಒಂದು ಗುಣಾತ್ಮಕ ಅಂಶ...
ನಮ್ಮೊಳಗೇ ಆಗಬೇಕಾದ ಆಂತರಿಕ 
ಬದಲಾವಣೆ...
ನಮ್ಮನ್ನೇ ನಾವು ಕಂಡುಕೊಳ್ಳುವ ಹೊಸದೊಂದು ಅರಿವು...
ಅಷ್ಟೇ...

No comments:

Post a Comment

 ‍‌‌‌‌‌‌‌‌‌‌     ಮೊದಲ ಕೆಲ ದಿನಗಳವರೆಗೆ ಭಾರವಾದ ಮನಸ್ಸಿನಿಂದ ಕಾರ್ಯಕ್ರ ಮದಲ್ಲಿ ಭಗವಹಿಸಿದ ನಮಗೆಲ್ಲ ಕೊನೆಯ ದಿನದ ' ಕಲ್ಯಾಣ ಮಹೋತ್ಸ ವ'- ಅಂದಾಗ ನಿರಾಳತೆ...