Monday, 17 October 2022

ನನಗೇ ಏಕೆ???...

ನೋವುಂಡ ಸಮಯದಲ್ಲಿ,
ವಿಶ್ವವೇ ನಿನ್ನ ವಿರುದ್ಧ ತಿರುಗಿ
ಬಿದ್ದಿದೆ- ಎನಿಸಿದಾಗ,
ಮುಸಲಧಾರೆ ಮಳೆಸುರಿದು 
ಕಂಗೆಟ್ಟು ಕೂತಾಗ,
ಎದುರಿಗಿರುವ ದಾರಿಗಳೆಲ್ಲವೂ
ಕಗ್ಗಂಟಾದಾಗ,
ಏನೂ ಮಾಡಲು ತೋಚದೇ 
ಕಂಗಾಲಾದಾಗ,
"ನನಗೇ ಏಕೆ ಹೀಗೇ"- 
ಎಂದೇನಾದರೂ ಅನಿಸಿದ್ದಿದೆಯಾ?

ಮೋಡಗಳ ಮರೆಯಲ್ಲಿ
ಸೂರ್ಯ ದಿಕ್ಕುಗಾಣದಾದಾಗ-
ನಕ್ಷತ್ರಗಳು ಹೊಳಪು ಕಳೆದುಕೊಂಡಾಗ,-
ಹಾಸಿಗೆಯಲ್ಲಿ ಹೊದಿಕೆ ಹೊದ್ದು, 
ತಲೆ ಅದರೊಳಗೆ ಹುದುಗಿಸಿಕೊಂಡು, 
ಬದುಕೇ ' ಭೂತ'ವಾಗಿ 
ಭಯ ಬೀಳಿಸಿದಾಗ,-
"ನನಗೇ ಏಕೆ ಹೀಗೆ?"-
ಎಂದೇನಾದರೂ ಅನಿಸಿದ್ದಿದೆಯಾ??...

ಹಾಗಾದರೆ,

ಜಗತ್ತು ಅತ್ಯಂತ ಸುಂದರವೆನಿಸಿದ ಗಳಿಗೆಯಲ್ಲಿ,-
ತುಂತುರು ಮಳೆ, ಮುತ್ತಿನ ಮಣಿ ಗಳೊಂದಿಗೆ ಕಾಮನಬಿಲ್ಲು ಮುಡಿದು ನಿಂತ ಇಳೆ  ಕಂಡಾಗ,-
"ಅಬ್ಬಾ! ಈ ಸುಂದರ ದಿನ ನನ್ನದು"-  ಎಂದೊಮ್ಮೆ ಮನ  ಹಿರಿಹಿರಿ ಹಿಗ್ಗಿದಾಗ,-
"ನನಗೇ ಏಕೆ"- ಎಂದು ಒಮ್ಮೆಯಾದ ರೂ ಅಂದುಕೊಳ್ಳಬಹುದಲ್ಲವೇ???

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......