Wednesday, 7 February 2018

ಹಿನ್ನೋಟ

ಹಿನ್ನೋಟ...
ವರುಷ ಕಳೆಯಿತು ಒಂದು...
ಏನು ಮಾಡಿದೆನೆಂದು...
ಕೇಳಿದೆನು ನನ್ನ ಮನಸನ್ನು ನಾನೇ...
ಅಳೆದರೂ.ತೂಗಿದರೂ..
ಕೆದಕೆದಕಿ ನೋಡಿದರೂ
ಒಂದಿನಿತು ಸಿಗಲಿಲ್ಲ..' ಇದ್ದರೆ ತಾನೇ?'...
ನನ್ನನ್ನೆ ನಾ ಜಾಣೆ
ಏಕೆ ತಿಳಿದೆನೋ ಕಾಣೆ
ಉಳಿದವರ ಬಗೆಗೇಕೆ ಈ ಉದಾಸೀನ..?
ಏನೆಲ್ಲ ಯೋಚಿಸಿ
' ಬೇಡದುದ ಯಾಚಿಸಿ'
ಪಡೆದುದೇನೆಂಬುದು ಅರ್ಥಹೀನ..
ನನ್ನದೇ ಲೋಕದಲಿ
ನಾ ಕಂಡ ರೀತಿಯಲಿ
ನನಗೆ ಬೇಕಾದಂತೆ ಬದುಕಿ ಉಳಿದೆ...
ಸುತ್ತೆಲ್ಲ ನಡೆದದ್ದು
ತಿಳಿದವರು ಹೇಳಿದ್ದು
ನನಗಲ್ಲವೆಂಬಂತೆ ದಿನಗಳನು ಕಳೆದೆ...
ನನ್ನ ನಾ ಬದಿಗಿಟ್ಟು
ನನ್ನವರ ಹೊರತಿಟ್ಟು
ನೋಡಬೇಕಿತ್ತು ತುಸು ಕಣ್ಣು ತೆರೆದು...
ಬಾವಿಕಪ್ಪೆಯ ರೀತಿ
ನಾನು,ನನ್ನಯ ಪ್ರೀತಿ
ನನ್ನದೊಂದೇ ಲೋಕವೆಂದು ಮೆರೆದು....
ಹಾಗೆ ಕಳೆದುದು ಎಷ್ಟೋ
ಬಾಕಿ ಉಳಿದುದು ಎಷ್ಟೋ
ಇನ್ನಾದರೂ ಕೊಂಚ ತಿಳಿಯಬೇಕು..
ಬರುವ ನವ ವರುಷದಲಿ
ಮನವೊಲಿವ ರೀತಿಯಲಿ
ಒಪ್ಪದಲಿ ಬದುಕೊಂದ ಬಾಳಬೇಕು..
.

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...