Friday, 23 February 2018

ಯುಗಾದಿ

ಬೇವು ಬೆಲ್ಲದಲಿ ಬೆರೆತ ರೀತಿಯಲಿ
ನೋವು ನಲಿವು ಇರಲಿ...
ಒಂದು ಬಿಂಬ ಇನ್ನೊಂದು ನೆರಳು
ಎಂಬ ಭಾವ ಬರಲಿ...
ತಾಸೆರಡು ತಾಸು ನೋವುಣ್ಣಬೇಕು
ಹೂ ಕಂದನೆತ್ತಿಕೊಳಲು..
ಬಿಸಿಲಬೇಗೆಯಲಿ ನಡೆ- ನಡೆಯಬೇಕು
ತನ್ನೆಳಲ ಸವಿಯನುಣಲು..
ಬೆವರ ಧಾರೆ ಧರೆಗುರುಳಬೇಕು
ಬೆಳೆ ಬೆಳೆದು ಪೈರು ನಿಲಲು..
ಗಿರಿ- ಬೆಟ್ಟ ಸುತ್ತಿ ತಾನೋಡಬೇಕು
ನದಿಯು ಸೇರೆ ಕಡಲು...
ಕಾರ್ಗತ್ತಲಾಳದಲೆ ನಕ್ಷತ್ರ ಪುಂಜ
ಬೀರುವದು ಬೆಳಕ ಕಿರಣ..
ಬೆಂಕಿನಾಲಿಗೆಗೆ ಸಿಕ್ಕಾಗ ಮಾತ್ರ
ಅದು ಚೊಕ್ಕ ಚಿನ್ನ ಜಾಣ...
ಬಾಳಕುಲುಮೆಯಲಿ ನೊಂದು ಬೆಂದು
ಹಣ್ಣಾಗಬೇಕು ಜೀವ..
ಅಂದಾಗ ಮಾತ್ರ ಪರಿಪೂರ್ಣ ಬದುಕು
ಗೆದ್ದಂತೆ ಸಾವ - ನೋವ...

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......