Wednesday, 7 February 2018

ಹೊಸ ವರುಷ

ಹೊಸ ವರುಷ
ಕಳೆದುದೆಲ್ಲ' ಕಾಲ' ನಡಿಗೆ
ವರುಷಕೊಮ್ಮೆ ಹೊಸದೇ ತೊಡಿಗೆ
ಎಂಬ ತತ್ವಜಗಕೆ ಸಾರಿ
ಮರುಳುಗೊಳಿಪ ನಗೆಯ ಬೀರಿ
ಹೊಸದೆ ಹರುಷ ತರುತಿದೆ....
ಹೊಸತು ವರುಷ ಬರುತಿದೆ....
ಹಳೆಯ ನೋವು, ನಲಿವ ಮರೆಸಿ...
ಹೊಸತು ರಂಗು, ರೂಪ ಬೆರಸಿ...
ಕೈಯ ಮೇಲೆ ' ಕನಸಮಾಲೆ'
' ಕೊಳ್ಳಿರೆಂದು'_ ಕೂಗು ಮೇಲೆ
ಹೊಸತೇ ಲೋಕ ತೆರೆದಿದೆ.....
ಹೊಸತೇ ವರುಷ ಬರುತಿದೆ....
ಚಿತ್ತಪಟಲ ಚಿತ್ರವಳಿಸಿ
ಮತ್ತೆ ಬರೆವ ಭಾವ ಬೆಳೆಸಿ
ಕೂಡಿ- ಕಳೆದು-ಗುಣಿಸಬಲ್ಲ
ಲೆಕ್ಕ ಬರೆವ ಒಲವನೆಲ್ಲ
ಮನದಿ ಬಿತ್ತಿ ಬೆಳೆಸಿದೆ....
ಹೊಸತು ವರುಷ ಬರುತಿದೆ....
' ಮೇಲು_ ಕೀಳು 'ಭಾವವಿಲ್ಲ
' ಕಾಲನೆದುರು'_ ಸಮರೆ ಎಲ್ಲ....
ಒಂದೇನೀತಿ, ಒಂದೇರೀತಿ,
ಸಕಲಜನಕೂ ಒಂದೇ ಪ್ರೀತಿ
ಸಂದೇಶ ಸಾರಿ ತರುತಿದೆ....
ಹೊಸತು ವರುಷ ಬರುತಿದೆ.....

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......