Monday, 13 March 2023

ಸಮಾ( ಜ) ಸೇವೆ...
               ಇಂದು ಬೆಳಿಗ್ಗೆ ಅಡಿಗೆಮನೆ ಯಲ್ಲಿದ್ದೆ. ಬೆಳಗಿನ ತಿಂಡಿಯ ತಯಾರಿ
ನಡೆದಿತ್ತು.calling bell ಹಾಡಿತು. ಹೋದೆ, ನೋಡಿದೆ, ಪಕ್ಜದ ಮನೆಯ ಮನೆಗೆಲಸದ ಸಹಾಯಕಿ." ಅಮ್ಮಾ, ರದ್ದಿ ಪೇಪರ್..." ಅಂದು ತೊದಲಿದಳು. ಇಲ್ಲೊಂದು ಪದ್ಧತಿಯಿದೆ. ತಿಂಗಳು/ ಎರಡು ತಿಂಗಳಿಗೊಮ್ಮೆ  ಕೆಲಸದವರು
ಮನೆಮನೆಗೆ ಹೋಗಿ ರದ್ದಿ ಕೇಳುತ್ತಾರೆ. ಕೊಟ್ಟವರು ಕೊಟ್ಟರು...ಇಲ್ಲದಿದ್ದವರು
ಇಲ್ಲ. ಕೆಲಸದವರು ಅವನ್ನು ಮಾರಿ 
ಸಿಕ್ಕಷ್ಟು ಹಣ ಪಡೆಯುತ್ತಾರೆ.
                  ಹೀಗಾಗಿ ನಾನು ಅವಳಿಗೆ
ಗಡಿಬಿಡಿಯಲ್ಲೂ ಕರೆದು ರದ್ದಿ ಇಟ್ಟ ಜಾಗ ತೋರಿಸಿದೆ.ಒಯ್ದಳು. " ಅಮ್ಮಾ ,ಕಟ್ಟಿಕೊಳ್ಳಲು ಒಂದು ಹಗ್ಗ ಬೇಕಿತ್ತು."- ನನಗೆ ಗಡಿಬಿಡಿಯಿತ್ತು. ನಾಳೆ ಬಾ ಎಂದರೆ, ಅದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ.ಬರಿ, postponement
ಎಂದು ನೆನಪಾಗಿ ಏನೋ ಒಂದು ಕೊಟ್ಟೆ." ಅಮ್ಮಾ, ಒಂದು ಚೀಲ ಇದ್ದರೆ 
ಬೇಕಿತ್ತು."- ತಲೆ ಪರಚಿಕೊಳ್ಳುವುದೊಂ ದೇ ಬಾಕಿ. ಕೂಗಿದರೆ ಇದ್ದಷ್ಟೂ energy  loss.!!! ಹಾಂ...ಹೂಂ ಅನ್ನದೇ ಒಂದು ಚೀಲ ಹುಡುಕಿ ಕೊಟ್ಟೆ.
"ಮತ್ತೆ ಅಮ್ಮಾ..." ಕಣ್ಣಿನಲ್ಲೇ ಕೇಳಿದೆ. "???" " ಸೆಕ್ಯೂರಿಟಿ ಚೀಟಿ ಇಲ್ಲದೇ ಒಯ್ಯಗೊಡುವದಿಲ್ಲ, ಚೀಟಿ ಬರೆದು ಕೊಡಿ..." " ಇಟ್ಟು ಹೋಗು, ಮಧ್ಯಾನ್ಹ
ಬರೆದಿಟ್ಟಿರುತ್ತೇನೆ, ನಾಳೆ ಒಯ್ಯಿ, ಈಗ ಕೆಲಸವಿದೆ, ಎಂದು ಮುಖ ತಿರುಗಿಸಿದೆ.
ಬಿಟ್ಟು ಹೋಗಲು ಅವಳಿಗೆ ಮನಸ್ಸಿಲ್ಲ.
ಒಯ್ದಳು...ಬೇರೆಯವರಿಂದ ಒಂದು ಸಾಲು ಬರೆಸಿಕೊಂಡು ಹೋಗಿರಬೇಕು.
           ಹೀಗೇ ಹಿಂದೊಮ್ಮೆ ಆದಾಗ ಅಳಿಯ ತಮಾಷೆ ಮಾಡಿದ್ದ," ನಾಳೆಯಿಂದ ನಮ್ಮ ಪೇಪರ ಅವಳ ಮನೆಗೇ ಹಾಕಲು ಹೇಳಿದರೆ ಉತ್ತಮ, ಇಬ್ಬರಿಗೂ ತ್ರಾಸಿಲ್ಲ..."
                 ನನಗೆ ಸನ್ಯಾಸಿಗೆ ' ಆಕಳು ದಾನ ' ಕೊಟ್ಟ ಕಥೆ ನೆನಪಾಯ್ತು. ಆಕಳು ಕಾಯಲು ಒಬ್ಬ ಹುಡುಗ/ ಹುಡುಗನಿಗೆ ರೊಟ್ಟಿ ಬಡಿಯಲು‌ ಒಬ್ಬ
ಮುದುಕಿ/ ಮುದುಕಿಯ ಸಹಾಯಕ್ಕೆ ಒಬ್ಬ ಹುಡುಗಿ/ ಹುಡುಗಿಯ ಕಾವಲಿಗೊಂದು ನಾಯಿ..."ಇತ್ಯಾದಿ...
              ಇದು ಹೊಸದಲ್ಲ, ಪ್ರತಿಸಲ ಮುಂದೆ ಹೀಗಾಗಲು ಬಿಡಬಾರದು/ 
ಬಿಡಕೂಡದು ಎಂಬ ಪ್ರತಿಜ್ಞೆ ಖಂಡಿತ...
ಆದರೆ 'ಪಾಲಿಸಲು' ಅಲ್ಲ, ' ಪ್ರತಿಜ್ಞೆ ಮುರಿಯಲು'...
               ಇದೇ ಕಾರಣಕ್ಕೆ ಬಹಳ ಜನ
ಅಂಥ ಉಸಾಬರಿಗೆ ಸರ್ವಥಾ ಹೋಗು ವದೇಯಿಲ್ಲ - ಎನಿಸುತ್ತದೆ...
            ‌‌‌‌     






No comments:

Post a Comment

      ಅಣ್ಣನ post graduation ಮುಗಿದು, ನೌಕರಿ ಸಿಕ್ಕು ಧಾರವಾಡದಲ್ಲಿ ಮನೆಮಾಡಿ, ನಾವು ಧಾರವಾಡಕ್ಕೆ ಬಂದದ್ದು ೧೯೬೫ರಲ್ಲಿ...ನಾವಿದ್ದ ಮನೆ  ಹತ್ತು ಕೋಣೆಗಳ ಬಹು ದೊಡ್...