Friday, 19 July 2024

Kundali of all from Koulagi

Ravi : Kanya Rashi/Hasta Nakshatra..
 
Vaiju : Kanya Rashi/ Chitta 

Tejas : Makara Rashi :
Uttarashada Nakshatra:

 Tanmay : Vrishick Rashi and Jeshta

Sunday, 4 February 2024

ಬದುಕು ಹಾಗೇ ಸಾಗುತ್ತಿದೆ...

 'ಸಂಧ್ಯಾ- ರಾಗ'...
     
ಯೌವನದ ಗುರುತುಗಳನ್ನು ಕಳೆದು
ಕೊಂಡು ಬದುಕುವದು 
ಯಾರಿಗೂ ಸುಲಭ ಸಾಧ್ಯವಲ್ಲ...
ನಸುಕಿನಲ್ಲೆದ್ದು ಮಗ್ಗಲು ಬದಲಿಸುವಾಗ ನಡುವಿನಲ್ಲಿ ಮೊದಲಿನ ಕಸುವಿಲ್ಲ...ಆದರೂ ಪರವಾಯಿಲ್ಲ, ಸಾಗುತಿದೆ ಬದುಕು...

ಬೆಳಿಗ್ಗೆ ಎದ್ದು ಚಹ ಮಾಡುತ್ತೇನೆ...
ಪೇಪರ್ ಓದುತ್ತೇನೆ...
ಮೊದಲಿನಂತೆ ಜೊತೆಗಾರರಾರಿಲ್ಲ,
ಮೊದ ಮೊದಲು 
ದೊಡ್ಡಮನೆಯ ಬಾಲ್ಕನಿಗಳಿಂದ 
ಮನೆ ತುಂಬ ಸೂರ್ಯಕಿರಣಗಳ ಸಂತಸವಿತ್ತು,
ಈಗ ಪುಟ್ಟ ಫ್ಲ್ಯಾಟ್ ನ ಸೂರ್ಯ,
ಕಿಟಕಿಗಳಿಂದಲೇ ಒಂದು ಗಂಟೆ
ಕಾಲ ಒಳಗಿಣುಕುತ್ತಾನೆ,
ಹಾಗೇ ಸಾಗುತಿದೆ ಬದುಕು...

ಮಳೆ ಬಂದರೆ ಛತ್ತು ಇದೆ, 
ಛತ್ರಿಯೂ ಇದೆ...
ಉಪದೇಶ ಕೊಡಲು ಜನರಿದ್ದಾರೆ...
ಮುದ್ದಿಸಲು,ಆಲಂಗಿಸಲು ಮೊಮ್ಮಕ್ಕಳು ಇವೆ.‌
ನನ್ನದೇ ಒಂದು ಪುಟ್ಟ 
ಕೋಣೆಯೂ ಇದೆ,
ಆದರೆ ವಾಕಿಂಗ್ ನಂತರ 
ಬೆವರು ಸುಲಭದಲ್ಲಿ ಆರುವುದೇ ಇಲ್ಲ-
ಒಟ್ಟಿನಲ್ಲಿ ಸಾಗುತಿದೆ ಬದುಕು...

ಹಾಗೆಂದು ಖುಶಿ ಖುಶಿ
ಇರುವವರನ್ನು ಕಂಡರೆ ನನಗೆ
ಅಸೂಯೆಯೇನೂ ಇಲ್ಲ...
ಕಾರಿನ ಕಿಟಕಿ ಕೆಳಗಿಳಿಸಿ
ಗಾಳಿ ಕುಡಿಯುತ್ತೇನೆ...
ಹಾಕಿದ ಹಾಡನ್ನೇ ಮತ್ತೆ 
ಮತ್ತೆ ಹಾಕಿಕೊಂಡು ಕೇಳುತ್ತೇನೆ...
ಸಾಕಿನ್ನು, ಗೆಳತಿಯರು ಅನ್ನುತ್ತೇನೆ,
ಮರುಕ್ಷಣವೇ -ಅವರನ್ನು ಮನೆಗೆ ಕರೆಯುತ್ತೇನೆ...
ನನ್ನದೇ ಮರ್ಜಿಯಲ್ಲಿ ಸಾಗುತಿದೆ ಬದುಕು...

ಒಮ್ಮೊಮ್ಮೆ,
ಮಾಡಿದ ಅಡುಗೆ ಸೀದು ಹೋಗುತ್ತದೆ-
ಆದರೂ ಅದೇ ಜಗತ್ತಿನ best food
ಅನಿಸುತ್ತದೆ...
ಯೋಗ ಅಂದರೆ ಆಸಕ್ತಿ ಇರಲಿಲ್ಲ,
ಈಗ ನನಗಿಂತ ಅರ್ಧವಯಸ್ಸಿನ  
'ಗುರು' ವಿನಿಂದ ಕಲಿಯುತ್ತಿದ್ದೇನೆ...
ಪರವಾಯಿಲ್ಲ , 
ಹೆಚ್ಚು-ಕಡಿಮೆ ಸಾಗುತಿದೆ ಬದುಕು...

ಇಂದಿಗೂ ಕನ್ನಡಿಯೆದುರು ನಿಂತು
ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.
ಬಾಲ್ಯ ಯೌವನವಾಗಿ,
ಯೌವನ ಪ್ರೌಢಾವಸ್ಥೆಗೆ ತಿರುಗಿ
ನಂತರ ಇಂದಿಗೆ ಹೇಗೆ,ಯಾವಾಗ ಬದಲಾಯಿತೋ ಗೊತ್ತಾಗಲೇಯಿಲ್ಲ...
ಬದುಕು ನನ್ನನ್ನು ಪರೀಕ್ಷಿಸಿದಷ್ಟೇ ನಾನೂ ಅದನ್ನು ಪರೀಕ್ಷಿಸಿದ್ದೇನೆ...
ನಮ್ಮಿಬ್ಬರ ಜುಗಲ್ಬಂದಿಯಲ್ಲಿ ಸಾಗುತಿದೆ ಬದುಕು...

ಕೆಲಸಗಳು ಕಡಿಮೆಯಾಗಿವೆ,
ಆದರೆ ಕೆಲ ಆಸೆಗಳು ಕಡಿಮೆಯಾಗಿಲ್ಲ...
ಹಲವರು ಹೇಳಿದ್ದನ್ನೇ ಹೇಳುತ್ತಾರೆ, ಏನೂ ಅನಿಸುವದಿಲ್ಲ...
ಬಾಲ್ಯದ ಹಲವಾರು ಗಲ್ಲಿ/ ಓಣಿ/ ಚಾಳು/ಅಂಗಡಿ/ಪೇಟೆ 
ಎಲ್ಲವೂ ನೆನಪಿನಲ್ಲಿವೆ...
ಆದರೆ ಈಗೀಗ ಏನನ್ನೂ
ಕೊಳ್ಳುವ ಮನಸ್ಸಾಗುವುದಿಲ್ಲ...
ಯಾರೇ ದಾರಿಯಲ್ಲಿ ಸಿಗಲಿ,
ಎಲ್ಲೋ ನೋಡಿದ್ದೇನೆ ಅನಿಸುತ್ತದೆ...
ಹೀಗೇ ಒಂದು ಲಯದಲ್ಲಿ 
ನಿತ್ಯ ಸಾಗುತಿದೆ ಬದುಕು...

ಮನೆಯೀಗ ಸ್ವಲ್ಪ ನೀಟಾಗಿದೆ, 
ಅಲ್ಲಲ್ಲಿ ಬಿದ್ದ ಪುಸ್ತಕಗಳು 
ಗಾಜಿನ ಕಪಾಟು ಸೇರಿವೆ...
ಸ್ನಾನದ ನೀರಿಗೆ ತಣ್ಣೀರು
ಬೆರೆಸಿಕೊಳ್ಳಬೇಕಾಗುತ್ತದೆ... 
'ರೀಲು'ಗಳನ್ನು ನೋಡುತ್ತಲೇ ಗಂಟೆಗಳನ್ನು ಕಳೆಯುತ್ತೇನೆ...
ಆದರೆ ಪಾಪ್ಕಾರ್ನ ಇಲ್ಲದೇ ಸಿನೆಮಾ
ನೋಡಲಾಗುವುದಿಲ್ಲ...
ಹೆಚ್ಚು ಕಡಿಮೆ ಹಾಗೇ ಸಾಗುತಿದೆ ಬದುಕು..

ಆಸು ಪಾಸಿನ ಮಕ್ಕಳು
ಆಂಟಿ ಅನ್ನುವದನ್ನು ಬಿಟ್ಟು ಯಾವಾಗ ' ಅಜ್ಜಿ' ಸುರುಮಾಡಿದರೋ ಗೊತ್ತಾಗಲೇಯಿಲ್ಲ... 
ಮನಸ್ಸಿಗೆ ನೋವಾದರೆ
ಕಣ್ಣುಗಳು ಹನಿಗೂಡುತ್ತವೆ-
ಎಂಬುದು ಯಾವಾಗ ತಿಳಿಯಿತೋ, 
ಅರಿವಿಗೇ ಬರದೇ ಸಾಗುತಿದೆ ಬದುಕು.

ಪರವಾಯಿಲ್ಲ, 
ಬದುಕು ಬದಲಾದರೂ 
ಹೆಚ್ಚು ಕಡಿಮೆ ಹಾಗೇ ಸಾಗಿದೆ, 
ಆರೋಗ್ಯವಿದೆ, ಗೆಳೆತಿಯರಿದ್ದಾರೆ, 
ಇನ್ನೂ ಬಾಕಿ ಬದುಕು ಕಳೆಯುವದಿದೆ...
ಖುಶಿ ಖುಶಿಯಾಗಿ ನಗುತ್ತಾ
ಇದ್ದುದನ್ನೇ ಒಪ್ಪುತ್ತಾ, ಅಪ್ಪುತ್ತಾ  
ಬದುಕಿ ಹೋಗುವದಿದೆ...
ಎಂಬ ಜ್ಞಾನದೊಂದಿಗೆ ಸಾಗುತಿದೆ
ಬದುಕು...

( ಮೂಲ: ಹಿಂದಿಯಿಂದ...)

Sunday, 14 January 2024

      
           ೧೯೬೫ ರಲ್ಲಿ ಕಾಲೇಜಿಗೆಂದು ಧಾರವಾಡಕ್ಕೆ ಬಂದಾಗ ಅಣ್ಣನಿಗೆ ಅದೇ ತಾನೇ ನೌಕರಿ ಹತ್ತಿತ್ತು.ಹೆಗಲು/ ಬೆನ್ನು ಬಾಗುವಷ್ಟು ಜವಾಬ್ದಾರಿ.ಮನೆ ಬಾಡಿಗೆ
ರೂ, ಮೂವತ್ಮೂರಕ್ಕೂ ತತ್ವಾರ...ಸರಿ ಮನೆಯಲ್ಲಿ ಇದ್ದ ಬಿದ್ದ ಪಾತ್ರೆಗಳನ್ನು ರಿಪೇರಿ ಮಾಡಿಸಿ/ಕಲಾಯಿ ಹಾಕಿಸಿ
ಕೆಲವನ್ನು ಅನಿವಾರ್ಯವಾದಾಗ ಖರೀದಿಸಿ ಬದುಕು ಸಾಗಿತ್ತು.ಆಗ JSS ಕಾಲೇಜಿನ ಆಡಳಿತ ಸಂಕಷ್ಟದಲ್ಲಿದ್ದು
ಒಳ್ಳೆಯದಿನಗಳು ಬರಬಹುದೆಂದು ಕಾಯುತ್ತಿದ್ದ ಕಾಲವದು.
       ‌‌ ‌‌‌        ನಮ್ಮ ಅಣ್ಣ ತುಂಬಾ ಉದಾರಿ.ತನ್ನಂತೆ ಹಳ್ಳಿ ಬಿಟ್ಟು ಓದಲು ಬಂದವರಿಗೆಲ್ಲ ಒಂದು ಭರವಸೆ... ಕೆಲವೊಮ್ಮೆ ನಮಗೆ ಗೊತ್ತಿದ್ದು, ಕೆಲವೊಮ್ಮೆ ಗೊತ್ತಿಲ್ಲದೇ ತನಗಾದಷ್ಟು
ಸಹಾಯ ಮಾಡುವುದನ್ನು ಎಂದೂ
ತಪ್ಪಿಸುತ್ತಿರಲಿಲ್ಲ.ಯಾರಾದರೂ ಧಿಡೀರೆಂದು ಮನೆಗೆ ಬಂದು ಮನೆಯಲ್ಲಿ ತೊಂದರೆಯಿದ್ದರೆ ' ತನಗೆ
ಹಸಿವಿಲ್ಲ/ ಎಲ್ಲೋ ಊಟವಾಯಿತು'
ಅಂತಾದರೂ ನಮನ್ನು ನಂಬಿಸಿ ತನ್ನ ಪಾಲಿನದನ್ನು ಅವರಿಗೆ ಕೊಟ್ಟು
ಪರಿಸ್ಥಿತಿ ಸಂಭಾಳಿಸುತ್ತಿದ್ದ ದಿನಗಳವು.
             ಕಾಲೇಜು ಆಡಳಿತ ಧರ್ಮಸ್ಥಳದವರ ಕೈಗೆ ಬಂದು, ನಿಯಮಿತ ಪಗಾರ ಬರತೊಡಗಿದ ಮೇಲೆ ಪರಿಸ್ಥಿತಿ ಸಹನೀಯವೆನಿಸಿತು.
ಕ್ರಮೇಣ ಸುಧಾರಿಸಿತು.ಎಲ್ಲರ ಮದುವೆ, ಮಕ್ಕಳು, ಶಿಕ್ಷಣ,ಅಂತ
 ಒಂದು ಮಟ್ಟ ತಲುಪಿದ ಮೇಲೆ/ ಎಲ್ಲರೂ ಚನ್ನಾಗಿ ಓದಿ, ನೌಕರಿ ಸಿಕ್ಕ ಮೇಲೆ ' ಇನ್ನು ಪರವಾಗಿಲ್ಲ'- ಅನ್ನುವಂತಾದಮೇಲೆ ಹಿಂದಿರುಗಿ
ನೋಡದಂತಾಯಿತು.
     ‌ ‌            ಈಗ ಬದುಕು ದಿಕ್ಕು ಬದಲಿಸಿ,ಮಕ್ಕಳೆಲ್ಲ ವಿದೇಶ  ಸೇರಿ,
'ಇನ್ನು ಅವರದೇ ಜಮಾನಾ'- ಅಂತ‌ ನಾವು back seat ಗೆ ಸರಿದಾದ ಮೇಲೆ ಬದುಕು ಬಣ್ಣ ಬದಲಾಯಿಸಿತು.
ಉಳಿದವರಂತೆ ಕೊರತೆಯಿಲ್ಲದ ಜೀವನ ಸುರುವಾಗಿ ಕಷ್ಟ ಪಟ್ಟು ದುಡಿದದ್ದರ ಫಲ ಕೈಗೆಟುಕುವ ಹಂತ
ತಲುಪಿದಾಗ, ಮೊಮ್ಮಕ್ಕಳು ದೊಡ್ಡವರಾದ ಮೇಲೆ ಅವರವರ ಆಸಕ್ತಿ/ಅನುಕೂಲ/ಆರ್ಥಿಕ ಬಲ ಅನುಸರಿಸಿ ಸಾಮಾನುಗಳ ಖರೀದಿ,
ನಿತ್ಯ ಹೊಸದರ ಹಂಬಲ,ದಿನದಿನಕ್ಕೆ ಬೆಳೆಯುತ್ತಿರುವ Consumerism ಹೆಚ್ಚಾಗುತ್ತ ಬೇಕೋ ಬೇಡವೋ ಒಟ್ಟು ಎಲ್ಲವನ್ನೂ ಖರೀದಿಸುತ್ತ ಮನೆಯಲ್ಲಿ
ತುಂಬುವುದು ಹವ್ಯಾಸವಾಗಿ ಮನೆಯ
ಜನರನ್ನು ಮೀರಿಸಿ ಸಾಮಾನುಗಳೇ
ಮನೆತುಂಬುವ ಪ್ರವೃತ್ತಿ ಬೆಳೆಯುತ್ತಿರು ವುದು ಸ್ಪಷ್ಟವಾಗಿ ಕಾಣುತ್ತಿದೆ.ತೊಂದರೆ
ಯಾಗುವುದು ವಾಸ್ತವ್ಯ ಬದಲಿಸುವ 
ಪ್ರಸಂಗ ಬಂದಾಗ,ವಸ್ತುಗಳ priority
ನಿರ್ಧರಿಸುವಾಗ, ಒಯ್ಯಲೂ ಆಗದೇ, ಒಗೆಯಲೂ ಆಗದೇ ಎಲ್ಲವೂ 
ಗೊಂದಲ/ಗೋಜಲು ಆಗಿಹೋಗುತ್ತದೆ
ಎಲ್ಲ ಬೇಕಿತ್ತು/ಖರೀದಿಯಾಯ್ತು/ಈಗ 
ಅನವಶ್ಯಕವಾಗಿವೆ.ಒಗೆಯಲು ಮನಸ್ಸಾಗದು,ಬೇಕೆಂಬವರಿಗೆ ಹಂಚಿಯೂ ಮಿಗುತ್ತವೆ.ವಿಲೇವಾರಿ
ಸುಲಭವಾಗುವುದಿಲ್ಲ ಎಂಬ ಕಿರಿಕಿರಿ.
ಕೆಲವೊಮ್ಮೆ ಸಮಯದ ಅಭಾವ,ನಿತ್ಯ ಕೆಲಸದೊಂದಿಗೆ ಸಮಯ ಕೊಡಲಾಗ ದ ಅಸಹಾಯಕತೆ ಏನೆಲ್ಲವೂ ಕಾರಣವಾಗುತ್ತವೆ ಎಂಬ ಸ್ವತಃ ಅನುಭವಗಳು ನಮ್ಮನ್ನು ಹದಗೊಳಿಸುತ್ತಿವೆಯೋ/ ಹಣ್ಣಾಗಿಸುತ್ತಿವೆಯೋ ಗೊತ್ತಾಗದ
ಕಾಲಘಟ್ಟವಿದು...
     

How to treat wet cough?

🟣 How to Treat Wet Cough (Productive Cough) A wet cough is a cough that produces mucus or phlegm. It is the body’s natural way of clearing ...