Monday, 27 August 2018

ಸಿಗ್ನಲ್- ಭಾವನೆ- ಅರ್ಚನೆ-ಕಂಡರಾಗದು

" ಅರ್ಥವಿಲ್ಲದ ಅರ್ಚನೆ -ಆರಾಧನೆ-
ಗಳನ್ನು ಕಂಡರಾಗದು ನನಗೆ...ಅಂತರಂಗದ
ಭಾವನೆಗಳು ಶುದ್ಧವಾಗಿರಬೇಕು..
ಬಾಹ್ಯದ ಬಡಿವಾರ ಬಿಲ್ಕುಲ್ ಕೂಡದು..."

ಇದು ಇತ್ತೀಚೆಗೆ ಕೇಳಿ ಬರುವ ಸೊಲ್ಲು...

ಹಾ .....ಭಾಯಿ ...ಹಾ..
ಇಲ್ಲವೆಂದವರಾರು???
ಆದರೆ ಬಾಹ್ಯ ಕಂಡಂತೆ ಅಂತರಂಗ
ಕಾಣುವದಿಲ್ಲವಲ್ಲ...
ಅಂತೆಯೇ ದಯೆ, ಸಹನೆ, ಭಕ್ತಿ,
ಸಹಾನುಭೂತಿಯಂಥ ಅಂತಸತ್ವ-
ಗಳೇ ಮಾನವತೆಯ ದ್ಯೋತಕಗಳು...

ಪ್ರೀತಿ ಪ್ರೇಮಕ್ಕೆ ಚುಂಬನವಿದ್ದಂತೆ....
ಕರುಣೆಗೆ ದಾನವಿದ್ದಂತೆ....
ವಿರಕ್ತಿಗೆ ತ್ಯಾಗವಿದ್ದಂತೆ.....
ಶಕ್ತಿಗೆ ತೋಳ್ಬಲವಿದ್ದಂತೆ...
ನೋವಿಗೆ ಕಂಬನಿಯಿದ್ದಂತೆ...
ಅಮೂರ್ತ ಭಕ್ತಿಗೆ  
ಅರ್ಚನೆ.. ಆರಾಧನೆಗಳೇ

Signal  ಗಳು ......

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...