Monday, 27 August 2018

ಚಮಚ- ಗಜಿಬಿಜಿ- ಸ್ಮಾರಕ- ನಿಮ್ಮಿಷ್ಟ

"ಬೇಂದ್ರೆ ಪುಣ್ಯತಿಥಿಯಂದು
ಬೇಂದ್ರೆ ಸ್ಮಾರಕ ಕಾವ್ಯ ಗಾಯನ
ಕಾರ್ಯಕ್ರಮದ ಆಯೋಜನವಾಗಬೇಕು..
ನಿಮ್ಮದೇ  ಜವಾಬ್ದಾರಿ.ನಿಮ್ಮದೇ ಇಷ್ಟ..
ಆದರೆ ಕಾರ್ಯಕ್ರಮ ಸ್ಮರಣೀಯವಾಗಬೇಕು."
 ಬಿಸಿಬಿಸಿ ಉಪ್ಪಿಟ್ಟು ಆರಿಸಲು plateನಲ್ಲಿ
ಚಮಚ ಆಡಿಸುತ್ತ ಕುಳಿತ ನನಗೆ boss phone..
..... ಅನ್ನುವ ಮೊದಲೇ cut ಆಯ್ತು...

ತಲೆತುಂಬಾ ಗಜಿಬಿಜಿ..ಧಿಡೀರ್ ಹೇಳಿದರೆ....
ನನ್ನಕಡೆ ಮಾಯಾದಂಡವಿಲ್ಲ...ಆದರೆ
Boss ಗೆ NO ಕೇಳಿ ಗೊತ್ತಿಲ್ಲ..
ನಾನೂ ಬೇಂದ್ರೆಯವರಂತೆ ಪ್ರಾರ್ಥಿಸಬೇಕಷ್ಟೇ..
ಸ್ಫೂರ್ತಿ ಗಂಗೆ ಯನ್ನ...

" ಇಳಿದು ಬಾ ತಾಯೆ ಇಳಿದು ಬಾ...
ಸತ್ತ ನರಗಳಲಿ ಶಕ್ತಿ ತುಂಬು ಬಾ....
ಮತ್ತ boss ನನು ಮಣಿಸೆ ಬಾ...
ಕುತ್ತು ಬಂದಂತೆಯೇ ವಾಪಸ್ ಕಳಿಸ ಬಾ...
ಸುತ್ತು ಜನರೆಲ್ಲರ ಮನವ ತಣಿಸು ಬಾ..

ಬಾರೆ ಬಾ...ಬಾ ಬಾರೆ ಬಾ ಆಆಆಆಆ

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...